ಕರ್ನಾಟಕ ಸುರಕ್ಷಿತವಾಗಿಡಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ : ಅಮಿತ್ ಶಾ

ಭಾನುವಾರ, 12 ಫೆಬ್ರವರಿ 2023 (10:54 IST)
ಮಂಗಳೂರು : ಕರ್ನಾಟಕವನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಎಲ್ಲರೂ ನನ್ನ ಜೊತೆ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ, ನಿಮ್ಮ ಧ್ವನಿಗೆ ಏನಾಗಿದೆ ಸ್ನೇಹಿತರೆ? ಜೋರಾದ ಧ್ವನಿಯಿಂದ ಹೇಳಿ, ಮೋದಿಜಿ ತ್ರಿಪುರಾದಲ್ಲಿದ್ದಾರೆ.

ಅಲ್ಲಿ ತನಕ ನಿಮ್ಮ ಮಾತು ಕೇಳುವಂತೆ ಹೇಳಿ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಬೇಕು. ಅದಕ್ಕೆ ಸಂಕಲ್ಪ ಮಾಡಿ ಜೋರಾಗಿ ಘೋಷಣೆ ಹಾಕಿ ಎಂದು ಕರೆ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ