ಲವ್ ಮ್ಯಾರೇಜ್ ಗೆ ವಿರೋಧ : ನಾಲ್ಕು ಜನರ ಕೊಲೆ

ಭಾನುವಾರ, 12 ಜುಲೈ 2020 (18:56 IST)
ಯುವಕ ಹಾಗೂ ಯುವತಿಯ ಪ್ರೇಮ ವಿವಾಹದ ಕಾರಣಕ್ಕೆ ಹುಡುಗನ ಮನೆಯ ನಾಲ್ವರು ಕೊಲೆಯಾಗಿದ್ದಾರೆ.

ಮಂಜುಳಾ ಹಾಗೂ ಮೌನೇಶ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ಮದುವೆಗೆ ಮಂಜುಳಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಮದುವೆಯಾಗಿದ್ದ ಜೋಡಿ ಸಂಸಾರ ನಡೆಸುತ್ತಿತ್ತು.

ಈ ನಡುವೆ ಮಂಜುಳಾ ಕಡೆಯವರಾದ ಫಕೀರಪ್ಪ ಹಾಗೂ ಅಂಬಣ್ಣ ಸೇರಿದಂತೆ ಮೂವರು ಬಂದು, ಹುಡುಗ ಮೌನೇಶನ ಮನೆ ಮಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಘಟನೆಯಲ್ಲಿ ನಾಲ್ವರು ಕೊಲೆಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ರಾಯಚೂರಿನ ಸಿಂಧನೂರು ಸುಕಾಲಪೇಟೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ