ಕಲಬುರಗಿ ಡಿಸಿ ಬಿ.ಶರತ್ ಏಕಾಏಕಿ ವರ್ಗಾವಣೆ

ಮಂಗಳವಾರ, 28 ಏಪ್ರಿಲ್ 2020 (22:16 IST)
ಲಾಕ್ ಡೌನ್ ನಲ್ಲಿ ಕೊರೊನಾ ವಿರುದ್ಧ ಪರಿಣಾಮಕಾರಿ ಕೆಲಸ ಮಾಡುತ್ತಿದ್ದ ಡಿಸಿಯನ್ನು ವರ್ಗಾವಣೆ ಮಾಡಲಾಗಿದೆ.

ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಶರತ್ ಬಿ. ಅವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೆಂಗಳೂರಿಗೆ ವರ್ಗಾವಣೆಗೊಳಿಸಲಾಗಿದೆ.  

ಕೊರೊನಾ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು ಕಂಡ ಜಿಲ್ಲೆ ಕಲಬುರಗಿ. ಆರಂಭದಿಂದಲೂ ಕೋವಿಡ್ – 19 ವಿರುದ್ಧ ಪರಿಣಾಮಕಾರಿಯಾಗಿ ಜಿಲ್ಲಾಧಿಕಾರಿ ಶರತ್ ಬಿ. ಕೆಲಸ ಮಾಡುತ್ತಿದ್ದಾರೆ. ಡಿಸಿ ಕಾರ್ಯ ಅಪಾರ ಜನಮನ್ನಣೆಗೆ ಕಾರಣವಾಗಿದೆ. ಎಲ್ಲ ಪ್ರಯತ್ನಗಳ ನಡುವೆ ಕಲಬುರಗಿ ರೆಡ್ ಝೋನ್ ನಲ್ಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ