ಎಲ್ಲಾ ಸಮುದಾಯದ ಜನರು ತಮ್ಮ ಗ್ರಾಮಗಳಲ್ಲಿ ಸೇರಿ ವಿಜಯೋತ್ಸವ ಮಾಡಬೇಕು..!

ಗುರುವಾರ, 30 ಮಾರ್ಚ್ 2023 (19:50 IST)
ಸರ್ಕಾರ ಮೀಸಲಾತಿ ಆದೇಶ  ಮಾಡಿದ ನಂತರ ಪ್ರತಿಕ್ರಿಯಿಸಿದ ಜಯಮೃಂತ್ಯುಂಜಯ ಸ್ವಾಮೀಜಿ ಆದೇಶ ಪತ್ರ ಬರುವವರೆಗೂ ಸಂಭ್ರಮ ಬೇಡ ಅಂತ ಹೇಳಿದ್ದೆವು.ಈಗ ಆದೇಶ ಪತ್ರ ಬಂದಿದೆ, ಕೈ ಸಿಕ್ಕಿದೆ‌.ಎಲ್ಲಾ ಸಮುದಾಯದ ಜನರು ತಮ್ಮ ಗ್ರಾಮಗಳಲ್ಲಿ ಸೇರಿ ವಿಜಯೋತ್ಸವ ಮಾಡಬೇಕು.ಎಲ್ಲರಿಗೂ ಇದರ ಶ್ರೇಯಸ್ಸು ಸಿಗಬೇಕು.ಅಂಬೇಡ್ಕರ್, ಬಸವಣ್ಣಗೆ ಮಾಲಾರ್ಪಣೆ ಮಾಡಿ ತೆರಳ್ತೀನಿ.ಇದು ಮೊದಲ ಜಯ.ನಮನ್ನ 2d ಗೆ ಸೇರಿಸಿದ್ದಾರೆ.ಚುನಾವಣೆ ಮುಗಿದ ಬಳಿಕ OBC ಮೀಸಲಾತಿಗೆ ಹೋರಾಟ ಆರಂಭವಾಗಲಿದೆ ಎಂದು ಹೇಳಿದ್ರು
 
ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ವಾಪಸ್ಸ್ ಪಡಿತ್ತಿವಿ ಅಂತ ಹೇಳಿಕೆ ವಿಚಾರವಾಗಿ ಜಯಮೃಂತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು,ಕಾಂಗ್ರೆಸ್ ನವರು ಹೇಳಿದ್ದು ತಪ್ಪು.ಅವರು ಈ ರೀತಿ ಹೇಳಬಾರದಿತ್ತು.ಇದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ.ಈ ರೀತಿ ಹೇಳಿಕೆ ಸರಿಯಲ್ಲ ಎಂದು ಜಯಮೃಂತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ