ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥ

ಶನಿವಾರ, 22 ಅಕ್ಟೋಬರ್ 2022 (20:28 IST)
ರಾಜ್ಯದ ಕೆಲ ಕಡೆ ಹಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿ‌ ಸುರಿದ ಮಳೆಯಿಂದಾಗಿ ಚಿಕ್ಕೋಡಿ - ಅಂಕಲಿ ರಾಜ್ಯ ಹೆದ್ದಾರಿ‌ ಮೇಲೆ ನೀರು ನಿಂತು ಜನ ಪರದಾಡಿದ್ರು. ಮಳೆ ನೀರಿನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯ ಮೇಲೆ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ರು. ವಾಹನಗಳು ಕೆರೆಯಂತಾದ ರಸ್ತೆಯಲ್ಲೇ ಸಂಚಾರ ಮಾಡಿದ್ರು. ಚಿಕ್ಕೋಡಿ ತಾಲೂಕಿನ ಬಾವನಸೌದತ್ತಿ ಗ್ರಾಮಕ್ಕೂ ಮಳೆ ನೀರು ನುಗ್ಗಿತ್ತು. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ವೃದ್ದೆ ಬಾಳವ್ವ ಕುಷ್ಟಿ ಎಂಬುವವರ ಮನೆಗೆ ಮಳೆ ನೀರು ನುಗ್ಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಬಾವನಸೌದತ್ತಿ ಗ್ರಾಮಸ್ಥರು ಭಾರಿ ತೊಂದರೆ ಅನುಭವಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ