ಸಿಎಂ ತವರು ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ತಿಥಿ ಕಾರ್ಯ ನಡೆಸಿದ ಜನರು

ಬುಧವಾರ, 1 ಏಪ್ರಿಲ್ 2020 (11:39 IST)
ಶಿವಮೊಗ್ಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಮಾಡಿದ್ದರೂ ಕೂಡ ಸಿಎಂ ತವರು ಜಿಲ್ಲೆಯಲ್ಲಿ ಜನರು ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ತಿಥಿ ಕಾರ್ಯ ನಡೆಸುತ್ತಿದ್ದಾರೆ.

ಶಿವಮೊಗ್ಗ ನಗರದ ಬಳಿ ತುಂಗಾ ನದಿ ತೀರದಲ್ಲಿ ಬಳಿಯಿರುವ ಕೋರ್ಪಲಯ್ಯನ  ಛತ್ರದಲ್ಲಿ ತಿಥಿ ಕಾರ್ಯ ಹಮ್ಮಿಕೊಂಡಿದ್ದು, ಇದರಲ್ಲಿ 150-200 ಜನರು ಭಾಗಿಯಾಗಿದ್ದಾರೆ.

 

ಲಾಕ್ ಡೌನ್ ಆದೇಶ ಉಲ್ಲಂಘಿಸಿ ಜನ ಸೇರಿದ ಹಿನ್ನಲೆಯಲ್ಲಿ  ಮಾಹಿತಿ ತಿಳಿದ ಪೊಲೀಸರು  ಸ್ಥಳಕ್ಕೆ ತೆರಳಿ ಜನರನ್ನು ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ