ಕೊರೊನಾ ಭೀತಿ ಇದ್ದರೂ ನೂರಾರು ಜನರಿಂದ ಕೆರೆಯ ಹೂಳು ತೆಗೆಯುವ ಕೆಲಸ ಮಾಡಿಸಿದ ಸಚಿವ ಈಶ್ವರಪ್ಪ

ಬುಧವಾರ, 1 ಏಪ್ರಿಲ್ 2020 (11:35 IST)
ಶಿವಮೊಗ್ಗ: ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶದ ಜನರನ್ನು ಲಾಕ್ ಡೌನ್ ಮಾಡಿ ಈಗ ಖುದ್ದು ಸಚಿವರು ತಾವೇ ಹೊರಗೆ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವ ಈಶ್ವರಪ್ಪ ಅವರು ಲಾಕ್ ಡೌನ್ ಆದೇಶವಿದ್ದರೂ ಕೂಡ ಮನೆಯಿಂದ ಹೊರಗಡೆ ಬಂದು ಕೆರೆ ಹೂಳು ತೆಗೆಯುವ ಕಾಮಗಾರಿ ವೀಕ್ಷಿಸಿದ್ದಾರೆ.

 

ಶಿವಮೊಗ್ಗ ಅಬ್ಬಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಿ ಕೆರೆಯ ಹೂಳು ತೆಗೆಯುವ ಕಾಮಗಾರಿಯನ್ನು ಈಶ್ವರಪ್ಪ ಅವರು  ಡಿಸಿ, ಎಸ್ಪಿ, ಸಿಇಒ, ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡದ್ದಾರೆ . ಕೊರೊನಾ ಭೀತಿ ಇದ್ದರೂ ನೂರಾರು ಜನರಿಂದ ಕೆಲಸ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ