6 ವರ್ಷದ ಮಗ ಹಾಗೂ ಎರಡು ತಿಂಗಳ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದ ಬಾಣಂತಿ ಆಶಾ ಎಂಬುವರು ತಮ್ಮ ಪತಿ ತಿಪ್ಪೇಸ್ವಾಮಿ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದಾರೆ. ನನ್ನ ಪತಿ ಚಳ್ಳಕೆರೆ ಮಾಜಿ ಶಾಸಕ ತಿಪ್ಪೇಸ್ವಾಮಿ ಮತ್ತು ಶಿರಹಟ್ಟಿ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರ ಬಳಿ ಕೆಲಸ ಮಾಡುತ್ತಿದ್ದರು. ವರ್ಗಾವಣೆ ದಂಧೆ ನಡೆಸುತ್ತಿರುವ ನನ್ನ ಪತಿ, ಶಾಸಕರ ಭವನದಲ್ಲಿಯೇ ವಾಸ್ತವ್ಯ ಹೊಡಿದ್ದ ಎಂದು ಬಾಣಂತಿ ಆಶಾ ಆರೋಪಿಸಿದ್ದಾರೆ.
ಮುಂಜಾನೆ 6 ಗಂಟೆಯಿಂದ ಮುಖ್ಯಮಂತ್ರಿ ಭೇಟಿಗಾಗಿ ಬಾಣಂತಿ ಕಾಯುತ್ತಿದ್ದರೂ. 11 ಗಂಟೆಗೆ ಮುಖ್ಯಮಂತ್ರಿ ಅವರ ಭೇಟಿ ಅವಕಾಶ ದೊರೆತ್ತಿದ್ದು, ಅವರ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾಳೆ. ಮಹಿಳೆಯ ಸಮಸ್ಯೆ ಆಲಿಸಿದ ಸಿದ್ದರಾಮಯ್ಯನವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಅವರ ಬಳಿ ದೂರು ನೀಡುವಂತೆ ಸೂಚಿಸಿದ್ದಾರೆ.