ವೇದಿಕೆ ಏರಿದ ತಕ್ಷಣ ಎಸ್ ಎಂ ಕೃಷ್ಣರನ್ನು ವಿಚಾರಿಸಿಕೊಂಡ ಪ್ರಧಾನಿ ಮೋದಿ

ಭಾನುವಾರ, 4 ಫೆಬ್ರವರಿ 2018 (16:22 IST)
ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ನೇರವಾಗಿ ಅರಮನೆ ಮೈದಾನದ ವೇದಿಕೆ ಬಂದಿದ್ದಾರೆ.

ವೇದಿಕೆ ಏರುವಾಗ ಅವರ ಜತೆಗೆ ಬಿಜೆಪಿ ನಾಯಕರ ದಂಡೇ ಜತೆಗಿತ್ತು. ಜೈಕಾರದ ನಡುವೆ ವೇದಿಕೆ ಏರಿದ ಮೋದಿ ಜನರತ್ತ ಕೈ ಬೀಸಿ ನಂತರ ವೇದಿಕೆಯಲ್ಲಿದ್ದ ಹಿರಿಯ ನಾಯಕ ಎಸ್ ಎಂ ಕೃಷ್ಣ ಕೈ ಕುಲುಕಿ ಉಭಯ ಕುಶಲೋಪರಿ ನಡೆಸಿದ್ದು ವಿಶೇಷವಾಗಿತ್ತು. ನಂತರ ತಮಗೆ ಮೀಸಲಾದ ಆಸನದಲ್ಲಿ ಪ್ರಧಾನಿ ಮೋದಿ ಆಸೀನರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ