ಮೋದಿ ಭೇಟಿಯಿಂದ ಮಂಜುನಾಥನ ದರ್ಶನಕ್ಕೆ ತೊಂದರೆಯಾಗದು: ವೀರೇಂದ್ರ ಹೆಗ್ಗಡೆ

ಶನಿವಾರ, 28 ಅಕ್ಟೋಬರ್ 2017 (11:38 IST)
ಮಂಗಳೂರು: ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದ ನಾಳೆ ಮಧ್ಯಾಹ್ನದವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂಬ ಸುದ್ದಿಗಳ ಬೆನ್ನಲ್ಲೇ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.

 
ಇಂದು ಮಧ್ಯಾಹ್ನದವರೆಗೆ ದೇವರ ದರ್ಶನ ಮಾಡಬಹುದು. ಹಾಗೆಯೇ ನಾಳೆ ಮಧ್ಯಾಹ್ನದ ನಂತರ ಸಂಪೂರ್ಣವಾಗಿ ಭಕ್ತರಿಗೆ ಮುಕ್ತವಾಗಿ ದೇವಾಲಯ ಪ್ರವೇಶಿಸಬಹುದು. ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡಲ್ಲ ಎಂದಿದ್ದಾರೆ.

ಅದರಲ್ಲೂ ಕಾರ್ತಿಕ ಸೋಮವಾರ ಭಕ್ತರಿಗೆ ಮುಖ್ಯವಾದುದು. ಆ ದಿನ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಡಾ. ಹೆಗ್ಗಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ