ಉತ್ತರ ಪ್ರದೇಶಕ್ಕೆ ಬಂದ ಕ್ರಿಕೆಟಿಗರಿಗೆ ಕೇಸರಿ ಶಾಲು: ಏನಿದರ ಗುಟ್ಟು?

ಶನಿವಾರ, 28 ಅಕ್ಟೋಬರ್ 2017 (08:18 IST)
ಲಕ್ನೋ: ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಸರಣಿ ಆಡಲು ಕಾನ್ಪುರದ ಹೋಟೆಲ್ ಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೇಸರಿ ಶಾಲು ಹೊದೆಸಿ ಬರಮಾಡಿಕೊಳ್ಳಲಾಯಿತು.

 
ಸಾಮಾನ್ಯವಾಗಿ ಕ್ರಿಕೆಟಿಗರಿಗೆ ಹೂವಿನ ಬೊಕೆ ಕೊಟ್ಟು ಸ್ವಾಗತಿಸಲಾಗುತ್ತದೆ. ಆದರೆ ಇಲ್ಲಿ ಹೂವಿನ ಬೊಕೆ ಬದಲು ಕೇಸರಿ ಶಾಲು ಹೊದೆಸಲಾಯಿತು. ಇದಕ್ಕೆ ಸ್ಪೂರ್ತಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಂದು ಹೋಟೆಲ್ ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ.

ಸದಾ ಕೇಸರಿ ವಸ್ತ್ರ ಧರಿಸುವ ಮುಖ್ಯಮಂತ್ರಿಗಳಿಂದ ಸ್ಪೂರ್ತಿಗೊಂಡು ಕ್ರಿಕೆಟಿಗರಿಗೂ ಕೇಸರಿ ಶಾಲು ಹೊದೆಸಿ, ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು. ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಯತ್ನ ಎಂದಿದ್ದಾರೆ ಹೋಟೆಲ್ ಸಿಬ್ಬಂದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ