ಶೀರೂರು ಶ್ರೀಗಳ ಆರಾಧನೆಗೆ ಪೊಲೀಸರ ತಡೆ

ಭಾನುವಾರ, 29 ಜುಲೈ 2018 (12:11 IST)
ಉಡುಪಿ: ಶ್ರೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ ಮೇಲೆ 13 ನೇ ದಿನಕ್ಕೆ ನಡೆಸಬೇಕಿದ್ದ ಆರಾಧನೆಗೆ ಪೊಲೀಸರು ತಡೆ ನೀಡಿದ್ದಾರೆ.

ಸ್ವಾಮೀಜಿಗಳ ಅನುಮಾನಸ್ಪದ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠ ಪೊಲೀಸರ ಸುಪರ್ದಿಯಲ್ಲಿದೆ. ಪೊಲೀಸರು ಸಾಕ್ಷ್ಯಗಳ ಸಂಗ್ರಹಣೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಆರಾಧನೆ ನಡೆಸಿದರೆ ಸಾವಿರಾರು ಭಕ್ತರು ಮಠಕ್ಕೆ ಬರುತ್ತಾರೆ. ಇದರಿಂದ ಸಾಕ್ಷ್ಯ ನಾಶವಾಗಬಹುದು ಎಂದು ಪೊಲೀಸರು ಆರಾಧನೆಗೆ ಒಪ್ಪಿಗೆ ನೀಡಿಲ್ಲ.

ಶೀರೂರು ಸ್ವಾಮೀಜಿಗಳ ಸಾವಿನ ಕುರಿತಾದ ಮರಣೋತ್ತರ ಪರೀಕ್ಷಾ ವರದಿ ಮತ್ತು ಎಫ್ಎಸ್ಎಲ್ ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ. ಹೀಗಾಗಿ ಅಲ್ಲಿಯವರೆಗೆ ಮಠ ಪೊಲೀಸರ ಸುಪರ್ದಿಯಲ್ಲೇ ಇರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ