ಯಡಿಯೂರಪ್ಪ ಪಿಎ ಸಂತೋಷ್`ಗೆ ಮತ್ತಷ್ಟು ಸಂಕಷ್ಟ..?

ಬುಧವಾರ, 23 ಆಗಸ್ಟ್ 2017 (11:04 IST)
ಈಶ್ವರಪ್ಪ ಪಿಎ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪಿಎ ಸಂತೋಷ್`ಗೆ ಕೋರ್ಟ್`ನಿಂದ ಸಮನ್ಸಯ ಜಾರಿಯಾಗಿದೆ. ಆಗಸ್ಟ್ 24ಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ,

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉಳಿದ 9 ಆರೋಪಿಗಳು ಸಂತೋಷ್ ಸೂಚನೆಯಂತೆ ಅಪಹರಣಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಇದನ್ನೇ ಕೋರ್ಟ್ ಮುಂದಿಟ್ಟು ಪೊಲಿಸರು ಸಂತೋಷ್ ನಿರೀಕ್ಷಣಾ ಜಾಮೀನು ವಜಾ ಮಾಡುವಂತೆ ಕೋರಿದ್ಧಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಬಿಎಸ್`ವೈ ನಿವಾಸದಲ್ಲಿದ್ದ ಪಿಎ ಸಂತೋಷ್ ಅವರಿಗೂ ಸಮನ್ಸ್ ತಲುಪಿದೆ ಎನ್ನಲಾಗಿದೆ.

ಈ ಮಧ್ಯೆ, ಯಡಿಯೂರಪ್ಪ ಪಿಎ ಸಂತೋಷ್ ತನಿಖಾಧಿಕಾರಿಗಳ ಮುಂದೆ ಇಲ್ಲ, ಗೊತ್ತಿಲ್ಲ ಎಂದಷ್ಟೇ ಉತ್ತರಿಸುತ್ತಿದ್ದಾರೆ. ಮೊಬೈಲ್ ಕೊಡಲು ನಿರಾಕರಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ