ಪ್ರಧಾನಿ ಮೋದಿ ಬಾಂಬೆಮಿಠಾಯಿ ಕಥೆ ಹೇಳ್ತಾರೆ: ಸಿಎಂ ಸಿದ್ದರಾಮಯ್ಯ

ಶುಕ್ರವಾರ, 22 ಸೆಪ್ಟಂಬರ್ 2017 (13:23 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಂಬೆ ಮಿಠಾಯಿ ಕಥೆ ಹೇಳ್ತಾರೆ. ಅವರದು ಕೇವಲ ಬೂಟಾಟಿಕೆ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅಭಿವೃದ್ಧಿ ಪದದ ಅರ್ಥ ಏನು ಅಂತ ಗೊತ್ತೇನ್ರಿ? ಪ್ರಧಾನಿ ಮೋದಿ ಬಾಂಬೆಮಿಠಾಯಿ ಕಥೆ ಹೇಳ್ತಾರೆ, ಇವರದು ಬೂಟಾಟಿಕೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ಸಮಯ ಹಾಳು ಮಾಡಿದಂತೆ ಎಂದು ಕಿಡಿಕಾರಿದ್ದಾರೆ. 
 
ಕೇಂದ್ರ ಸರಕಾರ ಬಡವರಿಗಾಗಿ ಏನು ಸಹಾಯ ಮಾಡಿದೆ? ಪ್ರಧಾನಿ ಮೋದಿ ಸರಕಾರ ಕೈಗಾರಿಕೋದ್ಯಮಿಗಳ, ಶ್ರೀಮಂತರ ಪರವಾಗಿದೆ. ಕೇಂದ್ರ ಸರಕಾರಕ್ಕೆ ಬಡವರ, ದೀನ ದಲಿತರ, ಶೋಷಿತರ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಗುಡುಗಿದ್ದಾರೆ.
 
ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ಬರೀ ಘೋಷಣೆಗಳು ನೀಡುತ್ತಿದೆ. ಯಾವುದೇ ಜನಪರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ