ಬೈಕ್ ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

ಸೋಮವಾರ, 2 ಮಾರ್ಚ್ 2020 (10:33 IST)
ಬೆಂಗಳೂರು : ಬೈಕ್ ಗೆ ಖಾಸಗಿ ಬಸ್  ಡಿಕ್ಕಿ ಹೊಡೆದೆ ಪರಿಣಾಮ , ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಳವಾರಪೇಟೆ ಬಳಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.


ಕಡ್ಲೂರು ಗ್ರಾಮದ ಸಚಿನ್ (24), ಪ್ರತಾಪ್ (24) ಮೃತಪಟ್ಟ ಬೈಕ್ ಸವಾರರು. ಅತಿವೇಗವಾಗಿ ಬಂದ ಬಸ್ ಎದುರುಗಡೆ ಬರುತ್ತಿದ್ದ ಬೈಕ್ ಡಿ್ಕಕಿ ಹೊಡೆದಿದೆ. ಪರಿಣಾಮ  ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲ ಸಾವನಪ್ಪಿದ್ದಾರೆ. ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ.


ಈ ಘಟನೆ  ಬಗ್ಗೆ ಚೆನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ