ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನದಿಂದ ರಹೀಂ ಪದಚ್ಯುತಿ
ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್ ಇಂದು ರಹೀಂ ಉಚ್ಚಿಲ್ ಅಧ್ಯಕ್ಷ ಸ್ಥಾನ ರದ್ದುಪಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಿದ್ದಾರೆ.
ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ಎರಡು ಬಾರಿ ರಹೀಂ ಉಚ್ಚಿಲ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.
ಆ ಬಳಿಕ ಹಲವು ಬೆದರಿಕೆ ಕರೆ ಕೂಡ ರಹೀಂ ಅವರಿಗೆ ಬಂದಿತ್ತು. ಇದೀಗ ನೂತನ ಬೆಳವಣಿಗೆ ಎಂಬಂತೆ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ.