ಶ್ರೀಗಳ ಸಾವಿಗೆ ರಾಹುಲ್​ ಗಾಂಧಿ ಸಂತಾಪ

ಮಂಗಳವಾರ, 3 ಜನವರಿ 2023 (16:45 IST)
ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮಾಡಿ, ಶ್ರೀಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಜಗತ್ತಿಗೆ ಒಳಿತಿನ ಮಾರ್ಗವನ್ನು ತೋರಿಸಿದ ಪ್ರಬುದ್ಧ ಚೇತನ. ಅವರು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು. ಸಮಾಜಕ್ಕೆ ಅವರ ಅತ್ಯುತ್ತಮ ಸೇವೆ ಸ್ಮರಣೀಯವಾಗಿದೆ. ಅವರ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ. ಅವರ ಬೋಧನೆಗಳನ್ನ ಜೀವನದಲ್ಲಿ ಅನುಸರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ