‘ನಾಟಿ ಕೋಳಿ ತಿಂದೇ ರಾಹುಲ್ ದೇವಾಲಯಕ್ಕೆ ಭೇಟಿ ನೀಡಿದ್ರೆ ತಪ್ಪೇನು?’

ಮಂಗಳವಾರ, 13 ಫೆಬ್ರವರಿ 2018 (16:47 IST)
ಬೆಂಗಳೂರು: ಎರಡನೇ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಕನಕಗಿರಿಯ ಉಗ್ರ ನರಸಿಂಹ ದೇವಾಲಯಕ್ಕೆ ರಾಹುಲ್ ಗಾಂಧಿ ಮಾಂಸ ಸೇವನೆ ಮಾಡಿ ಹೋಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
 

‘ರಾಹುಲ್ ಗಾಂಧಿಯವರು ನಾಟಿ ಕೋಳಿ ತಿಂದೇ ಹೋಗಿದ್ದರೂ. ಏನಿವಾಗ? ಏನು ತಿನ್ನಬೇಕು? ತಿನ್ನಬಾರದು ಎಂಬುದು ಅವರಿಷ್ಟ. ಇದು ಚರ್ಚಿಸುವ ವಿಚಾರವೇ ಅಲ್ಲ. ಅವರೇ ತಿಂದಿಲ್ಲವೆಂದು ಹೇಳಿದ ಮೇಲೆ ಮುಗೀತು’ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಕೈ ನಾಯಕರ ಜತೆ ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ