ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂತಾ?!

ಶನಿವಾರ, 5 ಮೇ 2018 (08:47 IST)
ಬೆಂಗಳೂರು: ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂತಾ? ಹೀಗಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಬಸವಣ್ಣನವರು ನುಡಿದಂತೆ ನಡೆ ಎಂದು ಸಾರಿದರು. ಆದರೆ ಪ್ರಧಾನಿ ಮೋದಿ ಬಸವಣ್ಣನವರ ಪ್ರತಿಮೆಗೆ ನಮಿಸುತ್ತಾರೆ. ಆದರೆ ನುಡಿದಂತೆ ನಡೆಯಲ್ಲ ಎಂದು ರಾಹುಲ್ ಟೀಕಿಸಿದ್ದಾರೆ.

ಮೋದಿ ಸರ್ಕಾರ ದಲಿತರ ಮೇಲೆ ದೌರ್ಜನ್ಯವೆಸಗುತ್ತಿದೆ. ಆದಿವಾಸಿಗಳು, ದಲಿತರ ಹಣವನ್ನು ಬೇರೆಯವರಿಗೆ ವರ್ಗಾಯಿಸುತ್ತಿದೆ. ಬಡವರಿಗೆ ಬ್ಯಾಂಕ್ ಗಳಲ್ಲಿ ಹಣ ಜಮೆ ಮಾಡಿ ಎನ್ನುತ್ತಿದೆ. ಕೊನೆಗೆ ಆ ಹಣವನ್ನು ನೀರವ್ ಮೋದಿಯಂತಹವರು ಲೂಟಿ ಮಾಡಿ ಪರಾರಿಯಾದರು ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ