ನಗರದಲ್ಲಿ ಮಳೆ ಅವಾಂತರ- ಅಂಡರ್ ಪಾಸ್ ಗಳು ಕ್ಲೋಸ್

ಮಂಗಳವಾರ, 7 ನವೆಂಬರ್ 2023 (13:23 IST)
ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಅಂಡರ್ ಪಾಸ್ ಗಳನ್ನ ಪೊಲೀಸರು ಕ್ಲೋಸ್ ಮಾಡಿದ್ದಾರೆ.ನಗರದ ಬಹುತೇಕ ಅಂಡರ್ ಪಾಸ್ ಗಳು ಕ್ಲೋಸ್ ಆಗಿದೆ.ಕೆಲ ತಿಂಗಳ ಹಿಂದೆ ಕೆ ಆರ್ ಸರ್ಕಲ್ ಅಂಡರ್ ಪಾಸ್ ಬಳಿ ದುರ್ಘಟನೆ ನಡೆದಿತ್ತು.ಅಂಡರ್ ಪಾಸ್ ನಲ್ಲಿ ನುಗ್ಗಿದ್ದ ನೀರಿನಲ್ಲಿ ಸಿಲುಕಿ ಓರ್ವ ಯುವತಿ ಸಾವನ್ನಪ್ಪಿದ್ಳು.ಘಟನೆ ನಂತರ ಮಳೆ ಬಂದ ಕೂಡಲೇ ಪೊಲೀಸರು ಅಂಡರ್ ಪಾಸ್ ಗಳನ್ನ ಕ್ಲೋಸ್ ಮಾಡುತ್ತಾರೆ.
 
ಬೈಯಪ್ಪನಹಳ್ಳಿ ಭಾಗದಲ್ಲಿ ರಸ್ತೆಯಲ್ಲಿ ಈಗಲೂ ಮಳೆ ನೀರು ನಿಂತಿದೆ.ಮಳೆ ನೀರಿನಲ್ಲಿ  ಬೈಕ್ ಗಳು ಓಡಾಡ್ತಿದೆ.ಮಳೆ ನೀರಿನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
 
ಇನ್ನೂ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೂಲ್ ಸೆಂಟರ್ ಗೆ ಡಿಕೆ ಶಿವಕುಮಾರ್ ಬೇಟಿ ನೀಡಿದ್ದಾರೆ.ಏರಿಯಾಗಳ ಮಳೆ ಗ್ರಾಫ್ ಸ್ಕೀನ್ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದ್ದಾರೆ.ಮೊಬೈಲ್ ಮುಖಾಂತರ ವಿಷಲ್ಸ್ ಅಧಿಕಾರಿಗಳು ತೋರಿಸಿದ್ದಾರೆ.ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟೆಜ್ ಮಳೆಯಾಗಿದೆ ಅನ್ನೋದ್ರ ಡಿಸ್ಪ್ಲೇ..ನಗರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣ ಮಳೆಯಾಗಿದೆ, ಎಷ್ಟು ದೂರು ಬಂದಿದೆ ಅನ್ನೋ ಮಾಹಿತಿ ಡಿಕೆಶಿವಕುಮಾರ್ ಪಡೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ