ಅಧಿವೇಶನಕ್ಕೆ ಹಾಜರ್ ಎಂದ ರಾಮಲಿಂಗಾರೆಡ್ಡಿ

ಶನಿವಾರ, 13 ಜುಲೈ 2019 (17:03 IST)
ಮೈತ್ರಿ ಸರಕಾರದ ವಿರುದ್ಧ ಅಸಮಧಾನಗೊಂಡು ರಾಜೀನಾಮೆ ನೀಡಿರೋ ರಾಮಲಿಂಗಾರೆಡ್ಡಿ ಅಧಿವೇಶನಕ್ಕೆ ಹಾಜರ್ ಆಗೋದಾಗಿ ಹೇಳುವ ಮೂಲಕ ಹೊಸ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ.

ಯಾರಿಗೂ ರಾಜೀನಾಮೆ ನೀಡೋವಂತೆ ಸೂಚನೆ ಕೊಟ್ಟಿಲ್ಲ. ನಮ್ಮ ಸಂಪರ್ಕದಲ್ಲಿ ಯಾವ ಶಾಸಕರೂ ಇಲ್ಲ ಅಂತ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ರಾಜಕೀಯ ನಿರ್ಧಾರವನ್ನು ಜುಲೈ 15 ರವರೆಗೆ ತೆಗೆದುಕೊಳ್ಳುವುದಿಲ್ಲ. ಆ ನಂತರವಷ್ಟೇ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ.

ಸ್ಪೀಕರ್ ಅವರು ಜುಲೈ 15 ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದು, ವಿಚಾರಣೆ ಎದುರಿಸಿದ ಬಳಿಕ ರಾಜಕೀಯ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ