ಹೆಜ್ಜೇನು ದಾಳಿಗೆ ಹೆದರಿ ಓಡಿಹೋದ ಸಚಿವ ರಮಾನಾಥ್ ರೈ

ಶುಕ್ರವಾರ, 24 ನವೆಂಬರ್ 2017 (13:23 IST)
ಹೆಜ್ಜೇನು ದಾಳಿಗೆ ಹೆದರಿ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಓಡಿಹೋದ ಘಟನೆ ವರದಿಯಾಗಿದೆ.
 
ನಗರದಲ್ಲಿರುವ ಬಯೋಪಾರ್ಕ್ ಉದ್ಘಾಟನೆಯ ವೇಳೆಯಲ್ಲಿ ಹೆಜ್ಜೇನುಗಳು ಹರಡುತ್ತಿದ್ದಂತೆ ಹೆದರಿ ಕಂಗಾಲಾದ ಸಚಿವ ರಮಾನಾಥ್ ರೈ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಓಡಿಹೋದ ಘಟನೆ ನಡೆದಿದೆ
 
ಏಕಾಏಕಿ ಹೆಜ್ಜೇನು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು,ಸಚಿವ ರಮಾನಾಥ್ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಹೆಜ್ಜೇನುಗಳ ದಾಳಿಯಿಂದ ಬಹುನಿರೀಕ್ಷಿತ ಬಯೋಪಾರ್ಕ್ ಉದ್ಘಾಟನೆಯ ಕಾರ್ಯಕ್ರಮವನ್ನು ಅಧಿಕಾರಿಗಳು ಅನಿರ್ಧಿಷ್ಠಾವದಿ ಅವಧಿಗೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ