ರಮೇಶ್ ಜಾರಕಿಹೊಳಿ ರಾಸಲೀಲೆ: ದಿನೇಶ್ ಕಲ್ಲಳ್ಳಿಗೆ ಪೊಲೀಸ್ ಬುಲಾವ್

ಬುಧವಾರ, 3 ಮಾರ್ಚ್ 2021 (09:43 IST)
ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಬಗ್ಗೆ ದೂರು ನೀಡಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ‍್ಯಕ್ಷ ದಿನೇಶ್ ಕಲ್ಲಳ್ಳಿಗೆ ಇಂದು ಪೊಲೀಸರು ವಿಚಾರಣೆಗೆ ಹಾಜರಾಗಲು ಬುಲಾವ್ ನೀಡಿದ್ದಾರೆ.


ಸಂತ್ರಸ್ತೆ ಪರವಾಗಿ ದಿನೇಶ್ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆಗೆ ಜೀವ ಬೆದರಿಕೆ, ಒತ್ತಡವಿದೆ. ಹೀಗಾಗಿ ಅವರ ಪರವಾಗಿ ತಾನು ದೂರು ನೀಡಿರುವುದಾಗಿ ಹೇಳಿದ್ದರು.

ಆದರೆ ನಿನ್ನೆ ಅವರು ನೀಡಿರುವ ಮಾಹಿತಿ ಅಪೂರ್ವವಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಈ ಸಂಬಂಧ ಎಫ್ ಐಆರ್ ದಾಖಲಾಗಿಲ್ಲ. ಹೀಗಾಗಿ ಹೆಚ್ಚಿನ ಮಾಹಿತಿ ಪಡೆಯಲು ದಿನೇಶ್ ಕಲ್ಲಳ್ಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಬಳಿಕ ಕಾನೂನು ತಜ್ಞರ ಮೊರೆ ಹೋಗಲು ಪೊಲೀಸರು ತೀರ್ಮಾನಿಸಿದ್ದಾರೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ‍್ಳಲು ಪೊಲೀಸರು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ