ರಮೇಶ್ ಜಾರಕಿಹೊಳಿ ರಾಜೀನಾಮೆ; ನೋ ಪ್ರಾಬ್ಲಂ ಎಂದ ಕೆಪಿಸಿಸಿ ಅಧ್ಯಕ್ಷ!

ಮಂಗಳವಾರ, 23 ಏಪ್ರಿಲ್ 2019 (16:48 IST)
ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರ ಅವರ ವೈಯುಕ್ತಿಕ ತೀರ್ಮಾನವಾಗಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಮೇಶ್ ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು. ಅವರನ್ನ ಹಲವು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೇವು. ಚುನಾವಣೆ ರಿಸಲ್ಟ್ ಬರಲಿ, ಮುಂದೆ ನೋಡೋಣ ಎಂದರು.

ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡ್ತಾರೆ. ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿ ಅಂತ ಪರೋಕ್ಷವಾಗಿ ರಾಜೀನಾಮೆ ಕೊಟ್ಟರೆ ತೊಂದರೆಯಿಲ್ಲವೆಂದು ದಿನೇಶ್ ಹೇಳಿದ್ದಾರೆ.

ಕೇಂದ್ರದಲ್ಲಿ ಹೊಸ ಸರ್ಕಾರ ಬರಲಿದೆ. ಆಗ ಆಪರೇಷನ್ ಕಮಲವೂ ಬಿದ್ದು ಹೋಗಲಿದೆ. ಬಿಜೆಪಿ ಬಲವೂ ಕುಗ್ಗಿಹೋಗಲಿದೆ. ಬಿಜೆಪಿಯವರು ಹಲವರು ಕಾಂಗ್ರೆಸ್ ಗೆ ಬರಲು ಕಾಯುತ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ