ಬಿಜೆಪಿಗೆ ಮತ ಹಾಕಿ ಎಂದ ರಮೇಶ್ ಜಾರಕಿಹೊಳಿ ವಿರುದ್ಧ ದೂರು?

ಭಾನುವಾರ, 21 ಏಪ್ರಿಲ್ 2019 (14:58 IST)
ಗೋಕಾಕ್ ನಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಪ್ರಚಾರ ನಡೆಸುತ್ತಿರುವೆ. ಗೋಕಾಕ್ ಶಾಸಕರು ನಮ್ಮ ಪಕ್ಷದ ಜತೆಗೆ ಇಲ್ಲ‌. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಅನಿವಾರ್ಯವಾಗಿ ಗೋಕಾಕ್ ನಲ್ಲಿ ನಾನು ಪ್ರಚಾರ ನಡೆಸಬೇಕಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಬೆಂಬಲಿಸುವಂತೆ ಸೂಚನೆ ನೀಡಿದ್ದಾರೆ. ಮಾಜಿ ಸಚಿವ‌ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಗೆ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಂದ ದೂರು ಸಲ್ಲಿಕೆಯಾಗಿದೆ ಎಂದರು.

ಗೋಕಾಕ್ ನಗರದಲ್ಲಿ ಸಭೆ ಮಾಡಿ ಬಿಜೆಪಿ ಬೆಂಬಿಸುವಂತೆ ರಮೇಶ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈಗಾಗಲೇ ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ ಎಂದರು.
ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೆ ಬಿಟ್ರು ಅಷ್ಟೆ ಎಂದರು.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ