ಆಕ್ಷೇಪಾರ್ಹ ಪೋಸ್ಟ್​ ಹಿನ್ನೆಲೆ ರವೀಂದ್ರ ಬಂಧನ

ಶನಿವಾರ, 30 ಏಪ್ರಿಲ್ 2022 (20:09 IST)
2017ರಲ್ಲಿ Facebook ನಲ್ಲಿ ಆಕ್ಷೇಪಾರ್ಹ ಪೋಸ್ಟ್​ ಮಾಡಿದ್ದ ಮೈಸೂರಿನ ವರುಣ ಗ್ರಾಮದ ಬರಹಗಾರ ಹಾರೋಹಳ್ಳಿ ರವೀಂದ್ರ ಅರೆಸ್ಟ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ರವೀಂದ್ರನನ್ನು ಬಂಧಿಸಿದ್ದಾರೆ.ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರ ಕರಣ ದಾಖಲಾಗಿತ್ತು .ಆದರೆ ರವೀಂದ್ರ 2019ರಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಅರೆಸ್ಟ್​ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಜಾತ್ಯತೀತರಿಗೆ ಅಪ್ಪ-ಅಮ್ಮ ಇಲ್ಲ ಎಂದು 2017ರಲ್ಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಪೋಸ್ಟ್​ ಮಾಡಿದ್ದರು. ಈ ಹೇ ಳಿಕೆ ವಿರುದ್ಧ ಹಾರೋಹಳ್ಳಿ ರವೀಂದ್ರ ಪೋಸ್ಟ್​ ಹಾಕಿದ್ದ. ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದಾರೆಂದು ಹಾರೋಹಳ್ಳಿ ರವೀಂದ್ರನ ವಿರುದ್ಧ ಪ್ರಕರಣದಾಖಲಾಗಿತ್ತು. ಚಿಕ್ಕೋಡಿ ನ್ಯಾಯಾಲಯದಿಂದ ನಾನ್ ಬೇಲೆಬಲ್​ ವಾರೆಂಟ್​ ಜಾರಿಯಾದ ಹಿನ್ನೆಲೆ ನಿನ್ನೆ ರವೀಂದ್ರನನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ