ರೆಬಲ್ ಸ್ಟಾರ್ ಅಂಬರೀಷ್ ಷರತ್ತು ಕೇಳಿ ದಂಗಾದ ಕಾಂಗ್ರೆಸ್ ನಾಯಕರು!

ಗುರುವಾರ, 19 ಏಪ್ರಿಲ್ 2018 (09:40 IST)
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಪಕ್ಷವೇ ಕೆಂಪು ಹಾಸು ಹಾಸಿ ಸ್ವಾಗತಿಸಿದರೂ ರೆಬಲ್ ಸ್ಟಾರ್ ಅಂಬರೀಷ್ ಸ್ಪರ್ಧಿಸುವ ಮೊದಲು ಹಲವು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ಹಾಲಿ ಮಂಡ್ಯ ಕ್ಷೇತ್ರದ ಶಾಸಕನಾಗಿರುವ ಅಂಬರೀಷ್ ಗೆ ಮತ್ತೆ ಕಾಂಗ್ರೆಸ್ ಅದೇ ಕ್ಷೇತ್ರದ ಟಿಕೆಟ್ ನೀಡಿತ್ತು. ಅದಕ್ಕಾಗಿ ಬಿ ಫಾರಂ ಪಡೆಯುವಂತೆ ಕೇಳಿಕೊಂಡರೆ ಮನೆಗೆ ಕಳುಹಿಸಿಕೊಡುವಂತೆ ಅಂಬರೀಷ್ ಫೋನ್ ಮೂಲಕ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಕೋರಿದ್ದರು.

ಇದೀಗ ಸಚಿವ ಕೆಜೆ ಜಾರ್ಜ್ ಜತೆ ಮಾತುಕತೆ ನಡೆಸಿರುವ ಅಂಬರೀಷ್ ಬಿ ಫಾರಂ ಪಡೆಯುವ ಮೊದಲೇ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ಒಂದು ಬಣ ಇಲ್ಲಿ ಅಂಬಿ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಅಂಬರೀಷ್ ಚುನಾವಣೆಗೆ ಸ್ಪರ್ಧಿಸುವ ಮೊದಲೇ ಷರತ್ತು ವಿಧಿಸಿದ್ದಾರೆ.

ಒಂದು ವೇಳೆ ತಾನು ಗೆದ್ದರೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನನಗೇ ನೀಡಬೇಕು. ಕೇವಲ ಶಾಸಕನಾಗಿ ಇರಲಾರೆ ಎಂದು ಅಂಬರೀಷ್ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಅಂಬರೀಷ್ ಷರತ್ತು ಕೇಳಿ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೇ ದಂಗಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ