ಮಂಡ್ಯ ಕ್ಷೇತ್ರಕ್ಕೆ ಬರುವಂತೆ ಅಂಬರೀಶ್ ರಲ್ಲಿ ಮುಖಂಡರ ಮನವಿ

ಗುರುವಾರ, 19 ಏಪ್ರಿಲ್ 2018 (05:59 IST)
ಬೆಂಗಳೂರು : ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕೂಡ ಪ್ರಕಟವಾಗಿದ್ದು, ಮಂಡ್ಯ ಕ್ಷೇತ್ರದಿಂದ ನಟ ಅಂಬರೀಶ್ ಅವರಿಗೆ ಟಿಕೆಟ್ ಕೂಡ ಫೈನಲ್ ಆಗಿದೆ. ಆದರೆ  ಅಂಬರೀಶ್ ಅವರು ಮಾತ್ರ ಮಂಡ್ಯಕ್ಕೆ ಬರದೆ ಬೆಂಗಳೂರಿನಲ್ಲಿಯೇ ಇದ್ದಾರೆ.


ಆದ ಕಾರಣ ಮಂಡ್ಯದ ಮುಖಂಡರು ಅಂಬರೀಶ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಕ್ಷೇತ್ರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಈಗ ಚುನಾವಣೆ ಘೋಷಣೆ ಆಗಿದೆ‌ ಕಾಂಗ್ರೆಸ್ ನಿಂದ ‌ನಿಮಗೆ ಟಿಕೆಟ್ ಫೈನಲ್ ಆಗಿದೆ, ಪಕ್ಷದ ಅಧ್ಯಕ್ಷರು ಬಿ ಫಾರಂ ಕೂಡ ವಿತರಣೆ ಮಾಡುತ್ತಿದ್ದಾರೆ. ನಾವು ಕೂಡ ಕ್ಷೇತ್ರದಲ್ಲಿ ‌ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ‌ಮಾಡಿಕೊಂಡಿದ್ದೇವೆ. ನೀವು ಕ್ಷೇತ್ರಕ್ಕೆ ಬನ್ನಿ, ಕಾರ್ಯಕರ್ತರ ಮುಖಂಡರ ಜೊತೆ ಸಭೆ ಮಾಡಿ. ಈಗಾಗಲೇ ನಮ್ಮ ಕಾರ್ಯಕರ್ತರು ನಿಮಗಾಗಿ ಕಾಯುತ್ತಿದ್ದಾರೆ ಎಂದು ಅಂಬರೀಶ್ ಅವರನ್ನು ಒತ್ತಾಯಿಸಿದ್ದಾರೆ.


ಈ ಬಗ್ಗೆ ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಾಲ ಮುಖಂಡರ ಜೊತೆಗೆ ಚರ್ಚೆ ಮಾಡಿ ನಂತರ ಆಯ್ತು ಮೊದಲು ಬಿ ಫಾರಂ ಬರಲಿ ಆಮೇಲೆ ನೋಡೋಣ ಎಂದು ಅಂಬರೀಶ್ ಅವರು ಉತ್ತರ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ