ಡಿಕೆ ಶಿವಕುಮಾರ್ ರಿಂದ ನಮ್ಮನ್ನು ಕಾಪಾಡಿ! ಮುಂಬೈ ಪೊಲೀಸರಿಗೆ ಮೊರೆಯಿಟ್ಟ ಅತೃಪ್ತ ಶಾಸಕರು

ಬುಧವಾರ, 10 ಜುಲೈ 2019 (07:59 IST)
ಬೆಂಗಳೂರು: ರಾಜೀನಾಮೆಯಿತ್ತು ಸಮ್ಮಿಶ್ರ ಸರ್ಕಾರವನ್ನು ತೂಗುಯ್ಯಾಲೆಯಲ್ಲಿಟ್ಟ ಅತೃಪ್ತ ಶಾಸಕರು ಇದೀಗ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಮುಂಬೈ ಪೊಲೀಸ್ ಹೈಕಮಿಷನರ್ ಗೆ ದೂರು ನೀಡಿದ್ದಾರೆ.


ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಳ್ಳುವ ಡಿಕೆಶಿ ಶಾಸಕರು ವಾಸ್ತವ್ಯವಿರುವ ಮುಂಬೈ ಹೋಟೆಲ್ ಗೆ ಬಂದು ಶಾಸಕರ ಮನ ಒಲಿಸಲಿದ್ದಾರೆ ಎಂಬ ಸುದ್ದಿ ಬಂದ ಹಿನ್ನಲೆಯಲ್ಲಿ ಅತೃಪ್ತ ಶಾಸಕರು ಈ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆಶಿ ನಮ್ಮ ಹೋಟೆಲ್ ಗೆ ಬಂದು ನಮ್ಮನ್ನು ಭೇಟಿಯಾಗಲು ಅವಕಾಶ ಕೊಡಬಾರದು ಎಂದು ಶಾಸಕರು ಹೇಳಿದ್ದಾರೆ.

ಡಿಕೆಶಿ ತಮ್ಮನ್ನು ರಾಜೀನಾಮೆ ವಾಪಸ್ ಪಡೆಯಲು ಒತ್ತಡ ಹೇರಬಹುದು ಎಂಬ ಭೀತಿಯಲ್ಲಿ ಶಾಸಕರು ಡಿಕೆಶಿ ಮತ್ತು ಸಿಎಂ ಕುಮಾರಸ್ವಾಮಿಯಿಂದ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ