ಹರಪನಹಳ್ಳಿ ಕಾಂಗ್ರೆಸ್​ನಲ್ಲಿ ಬಂಡಾಯ

ಮಂಗಳವಾರ, 18 ಏಪ್ರಿಲ್ 2023 (19:10 IST)
ಕರ್ನಾಟಕದಲ್ಲಿ ಚುನಾವಣಾ ಬಿಸಿ ದಿನೇದಿನೆ ಹೆಚ್ಚುತ್ತಿದೆ, ಅದರ ಜೊತೆಗೆ ಬಂಡಾಯದ ಕಿಡಿ ಕೂಡ ಎಲ್ಲ ರಾಜಕೀಯ ಪಕ್ಷಗಳಲ್ಲಿ ಹತ್ತಿಕೊಂಡಿದೆ. ಇದೀಗ ವಿಜಯನಗರದ ಹರಪನಹಳ್ಳಿಯ ಕಾಂಗ್ರೆಸ್​ನಲ್ಲಿ ಬಂಡಾಯದ ಕಿಡಿ ಜೋರಾಗಿದೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಟಿಕೆಟ್ ಕೊಟ್ರೇಶ್​ಗೆ ನೀಡಿರುವುದರಿಂದ ಆಕ್ರೋಶ ಭುಗಿಲೆದ್ದಿದೆ. ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಪುತ್ರಿಯರಾದ ಲತಾ ಮಲ್ಲಿಕಾರ್ಜುನ್​ ಮತ್ತು ವೀಣಾ ಬಂಡಾಯ ಎದ್ದಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿರುವ ಸಹೋದರಿಯರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ