ಮತ್ತೆ ಹುಟ್ಟಿಬಂದ ರೇಣುಕಾಸ್ವಾಮಿ: ಪತ್ನಿ ಸಹನಾಗೆ ಡೆಲಿವರಿ

Krishnaveni K

ಬುಧವಾರ, 16 ಅಕ್ಟೋಬರ್ 2024 (09:17 IST)
Photo Credit: X
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್  ನಡೆಸಿದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತೆ ಹುಟ್ಟಿಬಂದಿದ್ದಾನೆ. ಮಗುವಿನ ರೂಪದಲ್ಲಿ.

ರೇಣುಕಾಸ್ವಾಮಿ ಪತ್ನಿ ಸಹನಾಗೆ ಡೆಲಿವರಿಯಾಗಿದೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ರೇಣುಕಾ ಪತ್ನಿ ಸಹನಾಗೆ ಹೆರಿಗೆಯಾಗಿದೆ. ಪಟ್ಟಣಗೆರೆ  ಶೆಡ್ ನಲ್ಲಿ ರೇಣುಕಾಸ್ವಾಮಿ ಹತ್ಯೆಯಾದಾಗ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದಳು. ತನ್ನ ಮೇಲೆ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸುವಾಗಲೂ ರೇಣುಕಾ ತನ್ನ ಪತ್ನಿ ಗರ್ಭಿಣಿ ಎಂದು ಬೇಡಿಕೊಂಡಿದ್ದ ಎನ್ನಲಾಗಿತ್ತು.

ಪತಿಯ ಸಾವಿನ ಬಳಿಕ ಸಹನಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ  ಹೋಗಿದ್ದಳು. ಕೆಲವು ದಿನಗಳ ಹಿಂದೆ ಆಕೆ ವೀಕ್ ಆಗಿದ್ದರಿಂದ ಆಸ್ಪತ್ರೆಗೂ ದಾಖಲಾಗಿದ್ದಳು. ಇದೀಗ ಸಹನಾಗೆ ಡೆಲಿವರಿಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಸುದ್ದಿ ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆಯ ಬಳಿಕ ದುಃಖದ ಮಡುವಿನಲ್ಲಿದ್ದ ಕುಟುಂಬಕ್ಕೆ ಈಗ ಮಗುವಿನ ಜನನದ ಸುದ್ದಿ ಸಮಾಧಾನ ತಂದಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 6 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ಇದೀಗ ದರ್ಶನ್ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ