ಸೈಟ್ ವಿಚಾರಕ್ಕೆ ನಿವೃತ್ತ ಏರ್ಪೋರ್ಸ್ ಅಧಿಕಾರಿ ಮನೆಗೆ ನುಗ್ಗಿ ಗಲಾಟೆ ಆರೋಪ

ಸೋಮವಾರ, 31 ಜುಲೈ 2023 (18:54 IST)
ನಾಲ್ಕೈದು ಜನರಿಂದ ನಿವೃತ್ತ ಅಧಿಕಾರಿ ಅಭಿಷೇಕ್ ಕುಮಾರ್, ಕ್ಯಾಪ್ಟನ್ ಧನಂಜಯ್ ಎಂಬುವರ ಮೇಲೆ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.ಜುಲೈ 28 ರಂದು ರಾತ್ರಿ  ಕಾಡುಗೋಡಿಯ ದೊಡ್ಡ ಬನಹಳ್ಳಿಯಲ್ಲಿ ಘಟನೆ ನಡೆದಿದೆ.ಹಾಗೂ ಇದೇ ವೇಳೆ ಯುವತಿ ಮೇಲೆಯೂ ದೌರ್ಜನ್ಯ ಆರೋಪ ಕೇಳಿಬಂದಿದೆ.
 
ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಐವರ ವಿರುದ್ಧ ಪ್ರಕರಣ ದಾಖಲಾಗಿದೆ.ಗಲಾಟೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಕಮೀಷನರ್ ಬಿ. ದಯಾನಂದ ಭೇಟಿಯಾಗಿ ದೂರು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ