ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಸೋಮವಾರ, 8 ಮೇ 2023 (17:21 IST)
ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆ ಹಂತದಲ್ಲಿದೆ. ಈ ನಡುವೆ ನಿನ್ನೆ ಮಧ್ಯರಾತ್ರಿ ಬಿಟಿಎಂ ಲೇಔಟ್ ನಲ್ಲಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಆಗಿದೆ. ಬಿಜೆಪಿ ಮುಖಂಡರಾದ ಹರಿನಾಥ್ ಎಂಬುವವರು ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಹಣ ಹಂಚುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರಂತೆ. ಈ ವೇಳೆ 2 ಕಡೆಯವರ ಮಧ್ಯೆ ಗಲಾಟೆ ಆಗಿದ್ದು, ಗಲಾಟೆಯಲ್ಲಿ ಹರಿಹಂತ್ ತಪ್ಪಿಸಿಕೊಂಡರು ಹೋಗುವಾಗ ನಿಯಂತ್ರಣ ತಪ್ಪಿ ಬಿದ್ದು  ಗಾಯಗೊಂಡಿದ್ದಾನೆ ಇದನ್ನೆ ನೆಪಮಾಡಿಕೊಂಡು ಕಾಂಗ್ರೆಸ್ ನವರು ಹಲ್ಲೆ ಮಾಡಿದ್ದಾರೆಂದು ಸುಖಾ ಸುಮ್ಮನೆ , ಕಂಪ್ಲೆಂಟ್ ಮಾಡ್ಸಿದ್ದಾರೆ ಅದು ಕೂಡ ಸ್ವತಃ ಸಂಸದ ತೇಜಸ್ವಿ ಸೂರ್ಯ ಬೆಳಗ್ಗೆ ಮೂರು ಗಂಟೆಗೆ ಬಂದು FIR ಮಾಡ್ಸಿದ್ದಾರೆ. ವೈದ್ಯರು ಕೂಡ ಹರಿನಾಥ್ ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುಬಹುದು ಎಂದು ವೈದ್ಯ ರೇ ಹೇಳಿದ್ದಾರೆ .ಇನ್ನೂ ನಮ್ಮ ಪರವಾಗಿ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಸಿದ್ದಾರೆ. ಈ ಬಗ್ಗೆ ಮಡಿವಾಳ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ಮಂಜುನಾಥ್, ಪುತ್ರ ಲಿತೇಶ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ. ಆದ್ರೆ ನಮ್ಮವರು ಯಾರು ಹಲ್ಲೆ ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಲಾಗಿದೆ, ಬಿಜೆಪಿಯವರು ಹಣ ಹಂಚುತ್ತಿದ್ದ ಬಗ್ಗೆ ನಾವು ದೂರು ನೀಡಿದ್ರೆ FIR ಮಾಡ್ತಿಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಡಿವಾಳ ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ