ಸಂಘ ಪರಿವಾರವಲ್ಲ, ಚಡ್ಡಿ ಪರಿವಾರ: ರಮಾನಾಥ ರೈ

ಮಂಗಳವಾರ, 23 ಆಗಸ್ಟ್ 2016 (12:30 IST)
ಉಡುಪಿ ಜಿಲ್ಲೆಯ ಪ್ರವೀಣ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರಗಳನ್ನು ತರಾಟೆಗೆ ತೆಗೆದುಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ, ಅದು ಸಂಘ ಪರಿವಾರವಲ್ಲ, ಚಡ್ಡಿ ಪರಿವಾರವೆಂದು ಲೇವಡಿ ಮಾಡಿದ್ದಾರೆ. 
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಜರಂಗದಳದ ಪದಾಧಿಕಾರಿ ಕ್ರಿಮಿನಲ್ ಹಿನ್ನೆಲೆಯವರು. ಮೊದಲು ಅಲ್ಪ ಸಂಖ್ಯಾತ ಹಾಗೂ ಪರಿಶಿಷ್ಟ ಜಾತಿಯವರನ್ನು ಟಾರ್ಗೆಟ್ ಮಾಡುತ್ತಿದ್ದರು. ಆದರೆ, ಈಗ ಹಿಂದುಳಿದ ವರ್ಗದವನ್ನು ಟಾರ್ಗೆಟ್ ಮಾಡುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. 
 
ಗೋ ಸಾಗಾಟ ಮಾಡುತ್ತಿದ್ದ ಎಂದು ಆರೋಪಿಸಿ ಬ್ರಹ್ಮಾವರ ಸಮೀಪದ ಕೆಂಜೂರಿಯಲ್ಲಿ ಪ್ರವೀಣ ಪೂಜಾರಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಜಾಗರಣಾ ವೇದಿಕೆಯ 15 ಕಾರ್ಯಕರ್ತರನ್ನು ಬಂಧಿಸಿ, ಆರೋಪಿಗಳ ವಿಚಾರಣೆ ನಡೆಸಿದ್ದರು.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ