ಸದಾನಂದ ಗೌಡರಿಗೆ ಪಕ್ಷದ, ರಾಜ್ಯ, ರಾಷ್ಟ್ರದಲ್ಲಿ ಯಾವುದೇ ಅಧಿಕಾರ ಕೊಡಬಹುದು. ಆದರೆ ಈಗಿನ ಸಿಎಂ ಬದಲಾವಣೆ ಚರ್ಚೆಗೂ ಸದಾನಂದ ಗೌಡರ ರಾಜಿನಾಮೆಗೂ ಸಂಬಂಧವಿಲ್ಲ ಎಂದು ಸ್ಪಷ್ಪಪಡಿಸಿದರು.
ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಮತ್ತು ಯೋಗೇಶ್ವರ್ ಪದೇಪದೆ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ರಾಜ್ಯದಲ್ಲಿ ಸಿಎಂ ಇದ್ದಾರೆ, ಹಾಗಾಗಿ ಆ ವಿಚಾರ ಬೇಕಿಲ್ಲ. ಯಾರೂ ಕೂಡ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದು. ನಮ್ಮ ಪಕ್ಷದ ಹೈಕಮಾಂಡ್ ವೀಕ್ ಆಗಿಲ್ಲ. ನಮ್ಮ ಪಕ್ಷದಲ್ಲಿ ಶಕ್ತಿಯಿದೆ, ಪಕ್ಷದ ವರಿಷ್ಠರು ಈ ಬಗ್ಗೆ ಗಮನಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.