ಕಾವೇರಿಗಾಗಿ ಅಮೆರಿಕದಲ್ಲೂ ಸಿನೆಮಾ ಕಲಾವಿದರ ಪ್ರತಿಭಟನೆ

ಬುಧವಾರ, 7 ಸೆಪ್ಟಂಬರ್ 2016 (13:32 IST)
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಕಲಾವಿದರು ಪ್ರತಿಭಚನೆ ವ್ಯಕ್ತಪಡಿಸಿದ್ದಾರೆ.
 
ಮಾಜಿ ಸಚಿವ ಅಂಬರೀಶ್, ನಟ ಪ್ರೇಮ ಸೇರಿದಂತೆ ಅನೇಕ ಕಲಾವಿದರು ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದು, ಅಮೆರಿಕದಿಂದಲೇ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ.
 
ಮಂಡ್ಯ ಜಿಲ್ಲೆಯ ರೈತರು ಸಿನೆಮಾ ನಟರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಧ್ಯೆ ಅಮೆರಿಕದಲ್ಲೂ ಕಾವೇರಿಗಾಗಿ ಸಿನೆಮಾ ನಟರು ಪ್ರತಿಭಟನೆ ನಡೆಸುತ್ತಿರುವುದು ಕೊಂಚ ಮಟ್ಟಿನ ನೆಮ್ಮದಿ ತಂದಿದೆ.
 
ಅಕ್ಕ ಸಮ್ಮೇಳನ ಮುಕ್ತಾಯದ ನಂತರ ಮಂಡ್ಯ ಜಿಲ್ಲೆಗೆ ತೆರಳಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹಿರಿಯ ನಟ ಅಂಬರೀಶ್ ಮತ್ತು ನಟ ಪ್ರೇಮ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ