ಜಿಟಿಡಿಯನ್ನು ಆಣೆ ಪ್ರಮಾಣಕ್ಕೆ ಚಾಮುಂಡಿ ಬೆಟ್ಟಕ್ಕೆ ಕರೆದ ಸಾ.ರಾ.ಮಹೇಶ್

ಬುಧವಾರ, 17 ಮಾರ್ಚ್ 2021 (12:44 IST)
ಮೈಸೂರು : ಶಾಸಕ ಜಿಟಿ ದೇವೇಗೌಡ ಮತ್ತು ಶಾಸಕ ಸಾ.ರಾ.ಮಹೇಶ್ ನಡುವೆ ಜಟಾಪಟಿ ನಡೆದಿದ್ದು,  ಜಿಟಿಡಿಯನ್ನು ಸಾ.ರಾ.ಮಹೇಶ್ ಅವರು ಆಣೆ ಪ್ರಮಾಣಕ್ಕೆ  ಚಾಮುಂಡಿ ಬೆಟ್ಟಕ್ಕೆ ಕರೆದಿದ್ದಾರೆ.

ನನ್ನಿಂದ ತೊಂದರೆಯಾಗಿದ್ರೆ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಿ. ನೀವು ಪ್ರಮಾಣ ಮಾಡಿದ್ರೆ ರಾಜಕೀಯ ನಿವೃತ್ತಿ ಎಂದು ಜಿಟಿ ದೇಗೇಗೌಡರಿಗೆ ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.

ಸಾ.ರಾ.ಮಹೇಶ್ ಶಕುನಿ ಎಂಬ ಜಟಿಡಿ ಹೇಳಿಕೆ ವಿಚಾರ ಶಕುನಿ ಇಲ್ಲದಿದ್ರೆ ಮಹಾಭಾರತ ನಡೆಯುತ್ತಿರಲಿಲ್ಲ. ಮಂಥರೆ ಇರದಿದ್ದರೆ ರಾಮಾಯಣ ನಡೆಯುತ್ತಿರಲಿಲ್ಲ. ಧರ್ಮ ರಾಜ್ಯ ಸ್ಥಾಪನೆಗೆ ಇವರಿಬ್ಬರು ಕಾರಣಕರ್ತರು ಎಂದು ಶಾಸಕ ಜಿಟಿ ದೇವೇಗೌಡರಿಗೆ ಸಾ.ರಾ.ಮಹೇಶ್ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ