ಗೋವನ್ನು ಉಳಿಸಿ ಮತ್ತು ರಕ್ಷಿಸಿ ಅಭಿಯಾನ ಶುರು

ಶನಿವಾರ, 15 ಏಪ್ರಿಲ್ 2023 (17:50 IST)
ಬೆಂಗಳೂರಿನಲ್ಲಿ ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು  ಗೋ ಸೇವಕರು ಮುಂದಾಗಿದ್ರು.ಹೀಗಾಗಿ ಗೋ ರಕ್ಷಕ ಮಹೇಂದ್ರ ಜೈನ್ ಮತ್ತು ಸಂಘದಿಂದ ಅಭಿಯಾನ ಮಾಡಲಾಗಿದೆ.ಗೋವನ್ನು ಉಳಿಸಿ ಮತ್ತು ರಕ್ಷಿಸಿ ಎಂಬ ಅಭಿಯಾನ ಮಾಡಲಾಗಿದೆ.
 
ರಸ್ತೆ ರಸ್ತೆಯಲ್ಲಿ ಗೋವುಗಳು ಕಂಡು ಬರುತ್ತಿದೆ.ಸಾರ್ವಜನಿಕರಿಗೆ ರಸ್ತೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದೆ.ರಸ್ತೆಯಲ್ಲಿ ಕಂಡುಬರುವ ಹಸುಗಳನ್ನು ಗೋ ಶಾಲೆಗೆ ಕಳುಹಿಸಿ ರಕ್ಷಿಸಲು  ಸಂಘಟಣೆ ಮುಂದಾಗಿದೆ.ಹಸುವಿನ ಹಾಲನ್ನು ಹೈನುಗಾರಿಕೆಯ ಉತ್ಪನ್ನಗಳಾದ ಹಾಲು ಮೊಸರು ಪದಾರ್ಥಗಳಲ್ಲಿ ಬಳಕೆ ಮಾಡಲಾಗಿದೆ.
 
ಹಿಂದಿನ ಕಾಲದಲ್ಲಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಗ್ರಾಮಗಳ ಒಳಗೆ ಹಸುವಿನ ಸಗಣಿಯನ್ನು ಸುಟ್ಟು ಹಾಕುತ್ತಿದ್ದರು.ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲಿನ ಗೋಡೆ ಅಥವಾ ನೆಲಕ್ಕೆ ಗೋವಿನ ಸಗಣಿ ಬಳಿದರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾರೆ.ಹೀಗೆ ಹಲವಾರು ರೀತಿಯಲ್ಲಿ ಗೋಮಾತೆಯನ್ನು ಆರಾದನೆ ಮಾಡುತ್ತಾರೆ.ಬೆಂಗಳೂರಿನಲ್ಲಿನಲ್ಲಿ ಗೋವುಗಳು ಕಸ ತ್ಯಾಜ್ಯ ವಸ್ತು ಮತ್ತು ಪ್ಲಾಸ್ಟಿಕ್ ಸೇವಿಗೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.ಹಸುಗಳು ತ್ಯಾಜ್ಯ ತಿನ್ನುತ್ತಿದ್ದರೆ ಅದನ್ನು ಗಮನಿಸಿ ಹಸುವಿನ ಆರೋಗ್ಯ ಕಾಪಾಡಬೇಕಾಗಿದೆ.ಹಾಗಾಗಿ ಇಂತಹ ಅಭಿಯಾನವನ್ನು ಆರಂಭಿಸಲಾಗಿದೆ.ಹಸುವಿಗೆ ಪೂಜೆ ಮಾ೦ುವ ಮೂಲಕ ಹೊಸ ಅಭಿಯಾನ ಶುರುಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ