ಈ ಕಾರಣಕ್ಕೆ ಟಿಹೆಚ್ಒ ಮಂಜುನಾಥ್ ಗೆ ದೂರು ನೀಡದಂತೆ ಮನವೊಲಿಸಿದ್ರಾ ಹಿರಿಯ ಅಧಿಕಾರಿಗಳು

ಶುಕ್ರವಾರ, 18 ಡಿಸೆಂಬರ್ 2020 (12:04 IST)
ಬೆಂಗಳೂರು : ಹೊಸಕೋಟೆ ಟಿಹೆಚ್ಒ  ಮಂಜುನಾಥ್ ನಾಪತ್ತೆ ಪ್ರಕರಣ ಇಂದು ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೊಸಕೋಟೆ ಟಿಹೆಚ್ಒ  ಮಂಜುನಾಥ್ ಡಿ.16ರಂದು ನಾಪತ್ತೆಯಾಗಿದ್ದರು. ಇಂದು ಅವರು ಕಾರಿನಲ್ಲಿ ಒಬ್ಬರೆ ಇದ್ದಾಗ ಹಿರಿಸಾವೆ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎನ್ನಲಾಗಿದೆ. ಆದರೆ  ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಟಿಹೆಚ್ಒ  ಮಂಜುನಾಥ್ ಗೆ ಯಾವುದೇ ದೂರು ನೀಡದಂತೆ ಮನವೊಲಿಸಲಾಗಿದೆ ಎನ್ನಲಾಗಿದೆ.

ಜೊತೆಗೆ ಈ ಸಂಬಂಧ ಯಾರ ಹೆಸರೂ ಹೇಳದಂತೆ.  ಟಿಹೆಚ್ಒ ಮಂಜುನಾಥ್ ಗೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಟಿಹೆಚ್ಒ ಮಂಜುನಾಥ್ ಗೆ ಧಮ್ಕಿ ಹಾಕಿದ್ದ ಬಿಜೆಪಿ ಎಂಎಲ್ ಸಿ ಎಂಟಿಬಿ ನಾಗರಾಜ್ ಆಪ್ತ  ಜಯರಾಜ್. ಈ ಸಮಯದಲ್ಲಿ ಜಯರಾಜ್ ವಿರುದ್ಧ ಕೇಸ್ ಹಾಕಿದರೆ ಎಂಟಿಬಿ ನಾಗರಾಜ್ ಗೆ ಹಿನ್ನಡೆಯಾಗುತ್ತೆ ಎಂದು ಪ್ರೀಪ್ಲ್ಯಾನ್ ಮಾಡಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ