ಪ್ರತ್ಯೇಕ ಕೃಷಿ ಬಜೆಟ್ ; ಯಡಿಯೂರಪ್ಪ ರೈತರೊಂದಿಗೆ ಮಾಡಿದ್ದೇನು

ಗುರುವಾರ, 13 ಫೆಬ್ರವರಿ 2020 (19:19 IST)
ರಾಜ್ಯ ಬಜೆಟ್ ಗೆ ದಿನಗಣನೆ ಶುರುವಾಗಿದೆ. ಈ ನಡುವೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸೋದಕ್ಕೆ ಸಿಎಂ ಮುಂದಾಗಿದ್ದಾರೆ.

ರೈತ ಪರವಾಗಿರೋ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ಹೀಗಾಗಿ ರೈತ ಮುಖಂಡರು ಹಾಗೂ ರೈತ ಸಂಘಟನೆಯ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.

ಬಹುತೇಕವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ರು. ನೀರಾವರಿ ಕ್ಷೇತ್ರ, ಕೃಷಿ ಅಭಿವೃದ್ದಿ ಹಾಗೂ ವಿನೂತನ ಯೋಜನೆಗಳ ಕುರಿತಾಗಿ ವಿಸ್ತ್ರತವಾಗಿ ಸಿಎಂ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ