ಸಚಿವ ಸ್ಥಾನಕ್ಕಾಗಿ ಸಿಎಂ ಮೇಲೆ ಭಾರೀ ಒತ್ತಡ ಹಾಕ್ತಿರೋ ಎಂಟಿಬಿ ನಾಗರಾಜ್

ಗುರುವಾರ, 13 ಫೆಬ್ರವರಿ 2020 (14:54 IST)
ಉಪ ಚುನಾವಣೆಯಲ್ಲಿ ಸೋಲು ಕಂಡು ಸಚಿವ ಸ್ಥಾನದಿಂದ ವಂಚಿತರಾಗಿರೋ ಎಂಟಿಬಿ ನಾಗರಾಜ್ ತಮ್ಮ ಪಟ್ಟನ್ನು ಸಿಎಂ ಎದುರು ಮತ್ತಷ್ಟು ಬಿಗಿಗೊಳಿಸುತ್ತಿದ್ದಾರೆ.

ಬೈ ಎಲೆಕ್ಷನ್ ನಲ್ಲಿ ಸೋತ ಕಾರಣಕ್ಕಾಗಿ ಸಚಿವ ಸ್ಥಾನ ಕೊಡಬಾರದು ಅಂತ ಸುಪ್ರೀಂಕೋರ್ಟ್ ಹೇಳಿಲ್ಲ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾನೂನು ತಜ್ಞರ ಸಲಹೆ ಪಡೆದುಕೊಂಡೇ ಮಾತನಾಡುತ್ತಿರುವೆ. ಸಿಎಂ  ಬಿ.ಎಸ್.ಯಡಿಯೂರಪ್ಪ ಯಾವ ಖಾತೆಯನ್ನ ಕೊಟ್ಟರೂ ತಾವು ನಿರ್ವಹಿಸೋದಾಗಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಜೂನ್ ತಾವು ಎಂಎಲ್ ಸಿ ಆದರೂ ಆಗಬಹುದು ಅಂತ ಎಂಟಿಬಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ