ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿರುವ ಶರತ್ ಕೊಲೆ ಪ್ರಕರಣ

ಬುಧವಾರ, 4 ಜನವರಿ 2023 (19:09 IST)
ಕೋಣನ ಕುಂಟೆ ನಿವಾಸಿ ಶರತ್ ಕೊಲೆ ಪ್ರಕರಣ. ಸಂಬಂದಿಸಿದಂತೆ ಮೃತ ದೇಹಕ್ಕಾಗು. ಕಬ್ಬನ್ ಪಾರ್ಕ್ ಪೊಲೀಸರಿಗೆ ತಲೆನೋವಾಗಿ ಪರಿಣಾಮಿಸಿದೆ. ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟ್ ಮೃತದೇಹಕ್ಕಾಗಿ ತೀವ್ರ ಹುಡುಕಾಟ. ಶುರುಮಾಡಿದ್ದಾರೆ. ಪ್ರಮುಖ ಆರೋಪಿಗಳಾದ ಛಲಪತಿ , ಶರತ್, ಜೊತೆಗೆ ಕರೆದುಕೊಂಡು ಸ್ಥಳಕ್ಕೆ ಹೋಗಿರುವ ಕಬ್ಬನ್ ಪಾರ್ಕ್ ಪೊಲೀಸರಿಗೆ ಆರೋಪಿಗಳು ದಿನಕ್ಕೊಂದು ಜಾಗ ತೋರಿಸುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ಹಾಳವಾದ ಕಂದಕಗಳು, ದಟ್ಟವಾದ ಪೂದೆಗಳ ಜಾಗಗಳನ್ನು ತೋರಿಸುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ರು  ಮೃತದೇಹ..ಮಾತ್ರ ಸಿಗುತ್ತಿಲ್ಲ.
ಶವ ಸಿಗದೇ ಇದ್ದಾಗ, ಮತ್ತೊಂದು ಜಾಗ ಇರಬಹುದು ಎನ್ನುತ್ತಿರುವ ಆರೋಪಿಗಳು. ಹೀಗಾಗಿ ಆರೋಪಿ ಗಳ ಹೇಳಿದ ಜಾಗಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿರುವ ಪೊಲೀಸರ ತಂಡಗಳು..ಎಷ್ಟೇ ಹುಡುಕಾಟ ನಡೆಸಿದ್ರು, ಮೃತದೇಹದ  ಸಣ್ಣ ಕುರುಹು ಸಿಗದೇ ಪೋಲಿಸರು ಕಂಗಾಲಾಗಿದ್ದಾರೆ.
ಕಳೆದ ಒಂಬತ್ತು ತಿಂಗಳ ಹಿಂದೆ ಶರತ್ ನನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ ಆರೋಪಿಗಳು..ನಂತರ ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ