ಸಿದ್ಧಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ ಹೀಗಿದೆ...!

ಮಂಗಳವಾರ, 15 ಜನವರಿ 2019 (17:40 IST)
ತುಮಕೂರು ಸಿದ್ಧಗಂಗಾ ಶ್ರೀಗಳ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಆಗಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿಕೆ ನೀಡಿದ್ದಾರೆ.

ಶ್ರೀಗಳ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಆಗಿಲ್ಲ. ಆದರೂ ಪಲ್ಸ್, ಬಿ.ಪಿ. ಸೇರಿದಂತೆ ಇತರ ಪ್ಯಾರಾಮೀಟರ್ಸ್ ಸ್ಥಿತರವಾಗಿವೆ. ಪದೇ ಪದೇ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಪ್ರೋಟಿನ್ ಅಂಶ ಕಡಿಮೆ ಇರುವುದರಿಂದ  ಹೀಗಾಗುತ್ತದೆ ಎಂದರು.

ಆಲ್ಬಮಿನ್ ಅಂಶ ಹೆಚ್ಚಳವಾಗುವ ಔಷಧ ನೀಡಲಾಗಿದೆ. ಈ ಔಷಧ ಶ್ರೀಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದ ಅವರು, ಹೆಚ್ಚಿನ ಪ್ರಮಾಣದಲ್ಲಿ ಅಲ್ಬಮಿನ್ ಕೊಡುವುದನ್ನು ನಿಲ್ಲಿಸಿದ್ದೇವೆ. ಶ್ರೀಗಳು ಕಣ್ಣು ಬಿಟ್ಟು‌ನೋಡುತಿದ್ದಾರೆ. ಕೈ ಕಾಲನ್ನು ಚಲನ ಮಾಡುತ್ತಿದ್ದಾರೆ. ಮಠಕ್ಕೆ ಸ್ಥಳಾಂತರ ಮಾಡುವ ಬಗ್ಗೆ ನಾಳೆ‌ ನಿರ್ಧಾರವಾಗಲಿದೆ.

ಕಿರಿಯ ಶ್ರೀಗಳ ನೇತೃತ್ವದಲ್ಲಿ ನಾಳೆ‌ ಸಭೆ ನಡೆಯಲಿದೆ. ಸಭೆ ಬಳಿಕ ‌ಶಿಫ್ಟ್ ಮಾಡುವ ಬಗ್ಗೆ ‌ನಿರ್ಧಾರ ಹೊರಬೀಳಲಿದೆ ಎಂದು ವೈದ್ಯರು ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ