‘ಮೈತ್ರಿಯಲ್ಲಿ ಸಿದ್ದರಾಮಯ್ಯ ಕೇಂದ್ರಿತ ರಾಜಕೀಯ’; ಟೈಮ್ ಬಾಂಬ್ ಫಿಕ್ಸ್

ಶನಿವಾರ, 18 ಮೇ 2019 (16:26 IST)
ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಕೇಂದ್ರೀಕೃತ ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಇಂತದರಲ್ಲಿ ಸಿದ್ದರಾಮಯ್ಯ ಎಕ್ಸ್‌ಪರ್ಟ್ ಅಂತ ಮಾಜಿ ಸಿಎಂ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಮೇ 23ರ ನಂತರ ಸರ್ಕಾರ ಸ್ಪೋಟ ಮಾಡುತ್ತಾರೆ. ಇದಕ್ಕೆಲ್ಲ ಬಸವರಾಜ್ ಹೊರಟ್ಟಿ ಹೇಳಿಕೆ ಇಂಬು ಕೊಡುತ್ತೆ. ವಿಶ್ವನಾಥ್ ಕೂಡ ಕಮೆಂಟ್ ಮಾಡಿದ್ದಾರೆ.
ಮೈತ್ರಿ ಸರ್ಕಾರದ ಗೊಂದಲದಿಂದ ಜನ ಬೇಸತ್ತಿದ್ದಾರೆ ಎಂದರು.

ಎಲ್ಲ ಶಕ್ತಿಗಳು ಸೇರಿ ಕುಮಾರಸ್ವಾಮಿ ಕೆಳಗಿಳಿಸಲು ಪ್ರಯತ್ನಿಸುತ್ತಿವೆ‌. ಕಾಂಗ್ರೆಸ್ ಮತ್ತು ಜೆಡಿಎಸ್ ಒತ್ತಾಯದ ಮದುವೆಯಾಗಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಒತ್ತಾಯದ ಮದುವೆ ಮುರಿದು ಹೋಗುತ್ತೆ.
ಮೇ 23ರ ನಂತರ ರಾಜ್ಯದಲ್ಲಿ ಬದಲಾವಣೆ ಆಗುತ್ತೆ ಎಂದರು.

ಇನ್ನು ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ವಿಚಾರ ಕುರಿತು ಮಾತನಾಡಿದ ಅವರು, ಬಿಜೆಪಿ ಯಾವತ್ತೂ ಕಾಂಗ್ರೆಸ್ ವಿರುದ್ಧವಿದೆ. ಜೆಡಿಎಸ್ ಕಡೆಯಿಂದ ಮೊದಲು ರೆಸ್ಪಾನ್ಸ್ ಬರಲಿ. ಅವರ ನಿಲುವು ಏನೆಂದು ಹೇಳಲಿ ಎಂದರು. ದೇವೇಗೌಡ, ಪ್ರಜ್ವಲ್, ನಿಖಿಲ್ ಸೋಲುತ್ತಾರೆ. ಜನರು ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಯನ್ನು ಮನೆಗೆ ಕಳಿಸುತ್ತಾರೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ