ಬಸವೇಶ್ವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಸೋಮವಾರ, 9 ಮೇ 2016 (12:48 IST)
ಇಂದು ರಾಜ್ಯಾದ್ಯಂತ 883ನೇ ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು ನಗರದ ಚಾಲುಕ್ಯ ಸರ್ಕಲ್‌ನಲ್ಲಿರುವ ಶ್ರೀ ಬಸವೇಶ್ವರ   ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಯುಗಪುರುಷನಿಗೆ ಗೌರವವಂದನೆ ಸಲ್ಲಿಸಿದ್ದಾರೆ. 
 

 
ಕೇಂದ್ರ ಸಚಿವ ಅನಂತಕುಮಾರ್, ಕೆಪಿಸಿಸಿ ಅಧ್ಯಕ್ಷ- ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಹಕಾರ ಸಚಿವ ಮಹಾದೇವಪ್ರಸಾದ್, ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮೇಯರ್ ಮಂಜುನಾಥ್ ರೆಡ್ಡಿ, 
ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ, ಎನ್. ತಿಪ್ಪಣ್ಣ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. 
 
ಕಾರ್ಯಕ್ರಮದಲ್ಲಿ ಗೃಹಸಚಿವ ಡಾ.ಜಿ ಪರಮೇಶ್ವರ್ ಕ್ಯಾಮೆರಾಮನ್ ಆಗಿ ಕಾಣಿಸಿಕೊಂಡು ಗಮನ ಸೆಳೆದರು. ಮಾಧ್ಯಮದವರ ಕ್ಯಾಮರಾ ಪಡೆದುಕೊಂಡ ಅವರು ಬಸವಣ್ಣನವರ ಪುತ್ಥಳಿ ವಿಡಿಯೋ ಮಾಡಿದರು. 
 

ವೆಬ್ದುನಿಯಾವನ್ನು ಓದಿ