ಹನಿಟ್ರ್ಯಾಪ್ ಬಾಣ ಸದನದಲ್ಲಿ ಬಿಡಲು ರಾಜಣ್ಣಗೆ ಹೇಳಿದ್ದೇ ಸಿದ್ದರಾಮಯ್ಯ
ಇದೇ ವಿಚಾರವಾಗಿ ಇಂದೂ ಸದನದಲ್ಲಿ ಗದ್ದಲವೇರ್ಪಟ್ಟಿತ್ತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್ ಅಶೋಕ್ ಇದು ಸಿಎಂ ಕುರ್ಚಿಗಾಗಿಯೇ ನಡೆಯುತ್ತಿರುವ ಹನಿಟ್ರ್ಯಾಪ್ ಎಂದಿದ್ದಾರೆ.
ಈ ಹನಿಟ್ರ್ಯಾಪ್ ವಿಚಾರವನ್ನು ಕೆಎನ್ ರಾಜಣ್ಣ ಬಾಯಲ್ಲಿ ಹೇಳಿಸಿದ್ದೇ ಸಿದ್ದರಾಮಯ್ಯನವರು. ಇದೆಲ್ಲಾ ಅಧಿಕಾರಕ್ಕಾಗಿ ನಡೆಯುತ್ತಿರುವ ಮಸಲತ್ತು ಎಂದು ಅವರು ಆರೋಪಿಸಿದ್ದಾರೆ.