ಸಿದ್ದರಾಮಯ್ಯ ಪುತ್ರನಿದ್ದ ಕಾರು ಆ್ಯಕ್ಸಿಡೆಂಟ್

ಶನಿವಾರ, 10 ಆಗಸ್ಟ್ 2019 (18:29 IST)
ಶಾಸಕ ಯತೀಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗೂ ಶಾಸಕ ಯತೀಂದ್ರ ರಿದ್ದ ಅಪಘಾತವಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಹತ್ತಿರ ಈ ಅಪಘಾತ ಸಂಭವಿಸಿದ್ದು, ಬೈಕ್ ಗೆ ಕಾರು ಡಿಕ್ಕಿಯಾಗಿದೆ. ಬೈಕ್ ಸವಾರನೊಬ್ಬ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಶಾಸಕ ಯತೀಂದ್ರ ಅವರು ತಮ್ಮ ಬೆಂಬಲಿಗರೊಬ್ಬರ ಕಾರಿನಲ್ಲಿ ನೆರೆ ಪೀಡಿತ ಬಾದಾಮಿ ತಾಲೂಕಿಗೆ ಜನರ ಮನವಿ ಸ್ವೀಕಾರ ಮಾಡಲು ತೆರಳುತ್ತಿದ್ದರು. ಆಗ ಕಾರು ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಗಾಯಾಳುವಿನ ಆರೋಗ್ಯ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡುವಂತೆ ತಮ್ಮ ಬೆಂಬಲಿಗರಿಗೆ ಶಾಸಕರು ಹೇಳಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ