ಕೆ.ಎಸ್.ಈಶ್ವರಪ್ಪನ ಮೆದುಳು ಹುಡುಕಬೇಕಿದೆ ಎಂದ ಸಿದ್ದರಾಮಯ್ಯ

ಗುರುವಾರ, 28 ನವೆಂಬರ್ 2019 (22:13 IST)

ಸಚಿವ ಕೆ.ಎಸ್.ಈಶ್ವರಪ್ಪರಿಗೆ ಮೆದುಳು ಇದೆಯೋ ಇಲ್ವೋ ಎಂಬುದನ್ನು ಹುಡುಕಬೇಕಿದೆ. ಹೀಗಂತ ಮಾಜಿ ಸಿಎಂ ವ್ಯಂಗ್ಯವಾಡಿದ್ದಾರೆ.
 

ಬಳ್ಳಾರಿಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ರೆಡ್ಡಿ ಬ್ರದರ್ಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ರು.

ಈಶ್ವರಪ್ಪ ಪೆದ್ದ. ಮೆದುಳು ಹಾಗೂ ನಾಲಿಗೆಗೆ ಲಿಂಕ್ ಇಲ್ಲದೇ ಮಾತನಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ, ರೆಡ್ಡಿ ಬ್ರದರ್ಸ್ ಅಕ್ರಮ ಗಣಿಗಾರಿಕೆಯಿಂದ ಹಣ ಕೊಳ್ಳೆಹೊಡೆದಿದ್ದರು ಎಂದು ದೂರಿದ್ರು.

ಅನರ್ಹ ಶಾಸಕ ಆನಂದ ಸಿಂಗ್ ಕೂಡಾ ಅಕ್ರಮ ಗಣಿಗಾರಿಕೆಯಿಂದಲೇ ದುಡ್ಡು ಮಾಡಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದು ಸಿಎಂ ಆಗಿರೋರ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮತ ಹಾಕಬಾರದು ಎಂದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ