ಮೋದಿಯಿಂದ ದೇಶ ದಿವಾಳಿಯಾಗಿದೆ ಎಂದ ಸಿದ್ದರಾಮಯ್ಯ

ಶನಿವಾರ, 30 ಮೇ 2020 (20:58 IST)
ಕೇಂದ್ರದ ಎನ್ ಡಿ ಎ ಸರಕಾರ ಒಂದು ವರ್ಷದ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

ಆರ್ಥಿಕವಾಗಿ ದೇಶವನ್ನು ದಿವಾಳಿ ಮಾಡಿರುವುದೇ ಬಿಜೆಪಿಯ ದೊಡ್ಡ ಸಾಧನೆಯಾಗಿದೆ ಎಂದು ಟೀಕೆ ಮಾಡಿದ್ದಾರೆ.

ಮೋದಿಯವರ ಆಡಳಿತ ಎಲ್ಲ ದೃಷ್ಟಿಯಿಂದಲೂ ವೈಫಲ್ಯ ಕಂಡಿದೆ. ಕಾರ್ಮಿಕರು, ಯುವಜನತೆ ಹಾಗೂ ರೈತರಿಗೆ ಈ ಸರಕಾರದಿಂದ ಅನ್ಯಾಯವಾಗಿದೆ ಎಂದಿದ್ದಾರೆ.

ಕಪ್ಪು ಹಣ ವಾಪಸ್, ಎಲ್ಲರ ಖಾತೆಗೆ 15, ಜಿಡಿಪಿ ವೃದ್ಧಿ ಇದ್ಯಾವುದು ಆಗಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ