ಬಿಎಸ್‌ವೈ ವಿರುದ್ಧ ರೋಷಾವೇಶ ತೋರಿದ್ದ ಸಿದ್ದರಾಮಯ್ಯ ಈಗ್ಯಾಕೆ ಮೊಂಡುತನ ತೋರಿಸುವುದು

Sampriya

ಬುಧವಾರ, 25 ಸೆಪ್ಟಂಬರ್ 2024 (19:58 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ನಾಲಿಗೆ ಇರಬೇಕು ಅಥವಾ ಮರೆವಿನ ಕಾಯಿಲೆ ಇದೆಯಾ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದರು.

ಮುಡಾ ಹಗರಣ ಸಂಬಂಧ ನಾನೇಕೆ ರಾಜೀನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಆರ್ ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

2011ರಲ್ಲಿ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ  ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ, ಅಧಿಕಾರದಲ್ಲಿದ್ದುಕೊಂಡು ತನಿಖೆ ಎದುರಿಸಲು ಹೇಗೆ ಸಾಧ್ಯ? ಫ್ರೀ ಅಂಡ್ ಫೇರ್ ಟ್ರಯಲ್ ಆಗ ಆಗಬೇಕಾದರೆ ಯಡಿಯೂರಪ್ಪನವರು ರಾಜೀನಾಮೆ ನೀಡಬೇಕು ಎಂದು ರೋಶಾವೇಶ ತೋರಿದ್ದ ಸಿದ್ದರಾಮಯ್ಯನವರು ಈಗ ನಾನೇಕೆ ರಾಜೀನಾಮೆ ಕೊಡಬೇಕು ಎಂದು ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರೇ, ಅಂದು ನೀವು ಹೇಳಿದ್ದು ಮರೆತು ಹೋಯಿತಾ? ಅಥವಾ ನಿಮ್ಮ ಪ್ರಕಾರ ಯಡಿಯೂರಪ್ಪನವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯಾನಾ?

ಮುಖ್ಯಮಂತ್ರಿಗಳ ಅಡಿಯಲ್ಲಿ ಕೆಲಸ ಮಾಡುವ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿಗಳ ವಿರುದ್ಧವೇ ಹೇಗೆ ತನಿಖೆ ನಡೆಸಲು ಸಾಧ್ಯ? ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ಆಗಬೇಕಾದರೆ ತಾವು ರಾಜೀನಾಮೆ ಕೊಡಲೇಬೇಕು.

ನಿಮಗೆ ಕಿಂಚಿತ್ತಾದರೂ ನೈತಿಕತೆ, ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ನೀವು ಕುರ್ಚಿಗೆ ಅಂಟಿಕೊಂಡಷ್ಟೂ ನಿಮ್ಮ ಗೌರವ ಕಳೆದುಕೊಳ್ಳುತ್ತೀರಿ.

Work from Jail ಮಾದರಿ ಹಾಕಿಕೊಟ್ಟಿರುವ I.N.D.I ಮಿತ್ರ ಕೇಜ್ರಿವಾಲ್ ನಿಮಗೆ ಮಾದರಿಯಾಗದಿರಲಿ. ತಾವೇ ಹೇಳಿಕೊಳ್ಳುವಂತೆ ರಾಮಕೃಷ್ಣ ಹೆಗ್ಡೆ ಅವರು ತಮಗೆ ಮಾದರಿಯಾಗಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ